SCSS: ಹಿರಿಯ ನಾಗರೀಕರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್! ನಿವೃತ್ತಿ ಹಣ ಹೂಡಿಕೆ ಮಾಡಿ, ಖಚಿತ ಆದಾಯ ಪಡೆಯಿರಿ!

ಹಿರಿಯ ನಾಗರೀಕರೇ, ನೀವೇನಾದರೂ ನಿಮ್ಮ ನಿವೃತ್ತಿ ಹಣವನ್ನು ಸುರಕ್ಷಿತವಾಗಿಟ್ಟುಕೊಂಡು, ಪ್ರತಿ ತಿಂಗಳಿಗೊಮ್ಮೆ ಸ್ಥಿರ ಆದಾಯವನ್ನು ಗಳಿಸಬೇಕೆಂದಿದ್ದೀರಾ? ಕೇಂದ್ರ ಸರ್ಕಾರವು ನಿಮಗಾಗಿ ಬಂಪರ್ ಕೊಡುಗೆಯನ್ನು ನೀಡಿದೆ. ಕೇಂದ್ರ ಸರ್ಕಾರವು ಹಿರಿಯ ನಾಗರೀಕರ ಉಳಿತಾಯ ಯೋಜನೆ ಎನ್ನುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಲಿಸಿದ್ದು, ನಿವೃತ್ತರ ಆರ್ಥಿಕ ಭದ್ರತೆಗಾಗಿ ಜಾರಿಗೆ ತಂದಿರುವ ಸುರಕ್ಷಿತ ಹಾಗೂ ಹೆಚ್ಚು ಲಾಭದಾಯಕ ಉಳಿತಾಯ ಯೋಜನೆಯಾಗಿದೆ.

SCSS Scheme for Senior Citizen


ಹಿರಿಯ ನಾಗರೀಕರ ಉಳಿತಾಯ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು 60 ವರ್ಷ ಮೇಲ್ಪಟ್ಟವರು ಅರ್ಹರಾಗಿದ್ದು, ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದ ಸಂಪೂರ್ಣ ಹಣಕ್ಕೆ ಬರುವ ಬಡ್ಡಿಯನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅಥವಾ ಪೋಸ್ಟ್ ಆಫೀಸ್ ಖಾತೆಗೆ ಜಮಾ ಮಾಡಲಾಗುತ್ತದೆ.

ಏನಿದು ಹಿರಿಯ ನಾಗರೀಕರ ಉಳಿತಾಯ ಯೋಜನೆ? ಸೀನಿಯರ್ ಸಿಟಿಜನ್ ಗಳು ಈ ಯೋಜನೆಯಡಿಯಲ್ಲಿ ಸ್ಥಿರವಾದ ಆದಾಯವನ್ನು ಗಳಿಸಬಹುದೇ? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯವಾದ ದಾಖಲೆಗಳು ಯಾವುವು? ಯೋಜನೆಯ ಪ್ರಯೋಜನವೇನು? ಎಂಬೆಲ್ಲ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

SCSS

ಯೋಜನೆಯ ಕಿರು ಪರಿಚಯ:

ಅನುಷ್ಠಾನ ಗೊಳಿಸಿದ ಸರ್ಕಾರ ಕೇಂದ್ರ ಸರ್ಕಾರ
ಯೋಜನೆಯ ಹೆಸರು ಹಿರಿಯ ನಾಗರೀಕರ ಉಳಿತಾಯ ಯೋಜನೆ
ಅರ್ಹ ಫಲಾನುಭವಿಗಳು 60 ವರ್ಷ ಮೇಲ್ಪಟ್ಟವರು
ಕನಿಷ್ಠ ಹೂಡಿಕೆ ಮೊತ್ತ ರೂ. 1000
ಬಡ್ಡಿ ದರ ವಾರ್ಷಿಕ 8.2%
ಯೋಜನೆಯ ಒಟ್ಟು ಅವಧಿ 5 ವರ್ಷ

ಏನಿದು ಹಿರಿಯ ನಾಗರೀಕರ ಉಳಿತಾಯ ಯೋಜನೆ:

ಹಿರಿಯ ನಾಗರೀಕರ ಉಳಿತಾಯ ಯೋಜನೆಯು ಕೇಂದ್ರ ಸರ್ಕಾರವು ಹಿರಿಯ ನಾಗರೀಕರಿಗೆಂದು ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಫಲಾನುಭವಿಗಳು ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕ ಪ್ರತಿ ತ್ರೈಮಾಸಿಕಕ್ಕೆ 8.2% ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.

ಈ ಯೋಜನೆಯಡಿಯಲ್ಲಿ 60 ವರ್ಷ ಅಥವಾ ಅದಕ್ಕಿಂದ ಮೇಲ್ಪಟ್ಟ ನಿವೃತ್ತ ನಾಗರೀಕರು ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯನ್ನು ಒಟ್ಟು 5 ವರ್ಷದ ಅವಧಿಗೆ ನಿಗದಿಪಡಿಸಲಾಗಿದ್ದು, ನಿವೃತ್ತಿ ನಂತರವೂ ಕೂಡ ಸ್ಥಿರವಾದ ಆದಾಯವನ್ನು ಗಳಿಸಬೇಕೆಂದಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಯೋಜನೆಯ ವಿಶೇಷತೆ:

  • ಅವಧಿ: ಹಿರಿಯ ನಾಗರೀಕರ ಉಳಿತಾಯ ಯೋಜನೆಯ ಒಟ್ಟು ಅವಧಿ 5 ವರ್ಷವಾಗಿದ್ದು, ಹೂಡಿಕೆದಾರರು ಬೇಕಾದರೆ ಈ ಅವಧಿಯನ್ನು ಇನ್ನು ಮೂರು ವರ್ಷಗಳ ಕಾಲ ವಿಸ್ತರಿಸಿಕೊಳ್ಳಬಹುದಾಗಿದೆ.
  • ಹೂಡಿಕೆ ಮಿತಿ: ಹಿರಿಯ ನಾಗರೀಕರು ಕನಿಷ್ಠ ರೂ. 1000 ದಿಂದ ಗರಿಷ್ಟ ರೂ. 30 ಲಕ್ಷದ ವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ.
  • ಬಡ್ಡಿ ದರ: ಅರ್ಹ ಫಲಾನುಭವಿಗಳು ಉಳಿತಾಯ ಖಾತೆಯನ್ನು ತೆರೆಯುವಾಗ ಎಷ್ಟು ಬಡ್ಡಿ ದರ ಇರುತ್ತದೆಯೂ ಯೋಜನೆಯ ಅವಧಿ ಮುಗಿಯುವ 5 ವರ್ಷದ ವರೆಗೂ ಕೊಡ ಅದೇ ಬಡ್ಡಿದರ ಇರುತ್ತದೆ.
  • ಸುರಕ್ಷತೆ: ಈ ಒಂದು ಯೋಜನೆಯನ್ನು ಕೇಂದ್ರ ಸರ್ಕಾರವೇ ಜಾರಿಗೊಳಿಸಿರುವುದರಿಂದ, ಇದು 100% ಸುರಕ್ಷಿತವಾಗಿರುತ್ತದೆ.

ಯೋಜನೆಯ ಉದ್ದೇಶ:

  • ಹಿರಿಯ ನಾಗರೀಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು:

ಹಿರಿಯ ನಾಗರೀಕರ ಉಳಿತಾಯ ಯೋಜನೆಯಡಿಯಲ್ಲಿ 60 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ನಿವೃತ್ತಿ ನಂತರ ಹಣವನ್ನು ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ಹಣಕ್ಕೆ ನಿರ್ದಿಷ್ಟ ಬಡ್ಡಿದರವನ್ನು ನಿಗದಿಪಡಿಸಿ ಈ ಯೋಜನೆಯಡಿಯಲ್ಲಿ ಸ್ಥಿರ ಆದಾಯವನ್ನು ಗಳಿಸಲು ಅವಕಾಶ ಕಲ್ಪಿಸುವುದು.

  • ನಿಯಮಿತ ಆದಾಯವನ್ನು ಕಲ್ಪಿಸುವುದು:

ಹಿರಿಯ ನಾಗರೀಕರ ಉಳಿತಾಯ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರ ನಿಗದಿಪಡಿಸಿದ ಬಡ್ಡಿದರವನ್ನು ನಿಗದಿಪಡಿಸುವುದರಿಂದ, ಫಲಾನುಭವಿಗಳು ಹೂಡಿಕೆ ಮಾಡಿದ ಹಣಕ್ಕೆ ಅನುಗುಣವಾಗಿ ಪ್ರತಿ ತ್ರೈಮಾಸಿಕಕ್ಕೆ ಬಡ್ಡಿರೂಪದಲ್ಲಿ ಹಣವನ್ನು ಒದಗಿಸುವ ಮೂಲಕ ಅವರಿಗೆ ಸ್ಥಿರ ಆದಾಯದ ಮೂಲವನ್ನು ಒದಗಿಸುವುದು.

  • ಸುರಕ್ಷಿತ ಹೂಡಿಕೆಗೆ ಅವಕಾಶ ಕಲ್ಪಿಸುವುದು:

ಈ ಯೋಜನೆಯನ್ನು ಕೇಂದ್ರ ಸರ್ಕಾರವೇ ಅನುಷ್ಠಾನ ಗೊಳಿಸಿರುವುದರಿಂದ ಹಣ ನಷ್ಟವಾಗುವ ಅಪಾಯ ಬಹಳ ಕಡಿಮೆ ಇರುತ್ತದೆ. ಹಾಗಾಗಿ ಹಿರಿಯ ನಾಗರೀಕರು ಸುರಕ್ಷಿತವಾಗಿ ಹೂಡಿಕೆ ಮಾಡಬಹುದಾಗಿದೆ.

ಯೋಜನೆಯ ಪ್ರಯೋಜನ:

  • ನಿವೃತ್ತಿ ನಂತರ ಹಿರಿಯ ನಾಗರೀಕರು ತಮಗೆ ಅನುಕೂಲವಾಗುವಂತೆ ಹಣವನ್ನು ಪೋಸ್ಟ್ ಆಫೀಸ್ ಅಥವಾ ಅಧಿಕೃತ ಬ್ಯಾಂಕ್ ಖಾತೆಗೆ ಹೂಡಿಕೆ ಮಾಡುವ ಮೂಲಕ ಹೂಡಿಕೆ ಮಾಡಿದ ಹಣಕ್ಕೆ ಅನುಗುಣವಾಗಿ ಬಡ್ಡಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಸ್ಥಿರವಾದ ಆದಾಯವನ್ನು ಗಳಿಸಬಹುದಾಗಿದೆ.
  • ಯೋಜನೆಯಡಿಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಬಡ್ಡಿ ಹಣವನ್ನು ನೀಡುವುದರಿಂದ, ಈ ಹಣವು ಹಿರಿಯ ನಾಗರೀಕರಿಗೆ ಪಿಂಚಣಿಯಂತೆ ನಿರ್ದಿಷ್ಟ ಆದಾಯವನ್ನು ಗಳಿಸಲು ನೆರವಾಗುತ್ತದೆ.
  • ಹಿರಿಯ ನಾಗರೀಕರು ಈ ಯೋಜನೆಯಡಿಯಲ್ಲಿ ಸ್ಥಿರವಾಗಿ ಆದಾಯವನ್ನು ಗಳಿಸುವುದರಿಂದ ತಮ್ಮ ವೃದ್ದಾಪ್ಯದ ಸಂದರ್ಭದಲ್ಲಿ ತಮ್ಮ ಕುಟುಂಬದ ಇತರ ಸದಸ್ಯರ ಮೇಲೆ ಅವಲಂಬನೆಯು ಕಡಿಮೆಯಾಗುತ್ತದೆ.
  • ಹಿರಿಯ ನಾಗರೀಕರ ಉಳಿತಾಯ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಕೆಲವು ತೆರಿಗೆ ವಿನಾಯಿತಿಗಳು ದೊರೆಯುವುದರಿಂದ ಇದು ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ.

ಹೂಡಿಕೆ ಮೊತ್ತ ಮತ್ತು ಬಡ್ಡಿದರದ ವಿವರ:

ಪ್ರತಿ ತ್ರೈಮಾಸಿಕಕ್ಕೆ ಶೇಕಡಾ 8.2% ಬಡ್ಡಿ ನಿಗದಿಪಡಿಸಿರುವುದರಿಂದ ಅರ್ಹ ಫಲಾನುಭವಿಗಳಿಗೆ ಸುಗುವ ಬಡ್ಡಿಯ ಲಾಭದ ವಿವರವನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಒಟ್ಟು ಹೂಡಿಕೆ ಮೊತ್ತ ವಾರ್ಷಿಕ ಬಡ್ಡಿ ದರದ ಮೊತ್ತ ಪ್ರತಿ ತ್ರೈಮಾಸಿಕಕ್ಕೆ ಸಿಗುವ ಬಡ್ಡಿ ಹಣ 5 ವರ್ಷ ಹೂಡಿಕೆ ಮಾಡಿದ ಹಣದಲ್ಲಿ ಸಿಗುವ ಲಾಭ
₹5,00,000/-₹41,000/-₹10,250/-₹2,05,000/-
₹10,00,000/-₹82,000/-₹20,500/-₹4,10,000/-
₹20,00,000/-₹1,64,000/-₹41,000/-₹8,20,000/-
₹30,00,000/-₹2,46,000/-₹61,500/-₹12,30,000/-

ಅರ್ಹ ಫಲಾನುಭವಿಗಳು ಯಾರು?

  • 60 ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರೀಕರು.
  • 55 ವರ್ಷದಿಂದ 60 ವರ್ಷದೊಳಗಿನ ನಿವೃತ್ತಿ ಹೊಂದಿರುವ ನಾಗರೀಕ ಸಿಬ್ಬಂದಿಗಳು.
  • 50 ವರ್ಷ ತುಂಬಿದ ಮಿಲಿಟರಿ ಅಥವಾ ರಕ್ಷಣಾ ಇಲಾಖೆಯ ನಿವೃತ್ತಿ ನೌಕರರು.
  • ಪತಿ ಹಾಗೂ ಪತ್ನಿ ಸೇರಿ ಇಬ್ಬರು ಕೂಡ ಒಟ್ಟಿಗೆ ಜಂಟಿ ಖಾತೆಯ್ನು ತೆರೆಯಬಹುದಾಗಿದೆ.
  • ಹಿಂದೂ ಅವಿಭಜಿತ ಕುಟುಂಬದವರು ಹಾಗೂ ಭಾರತದಲ್ಲಿ ವಾಸವಿಲ್ಲದ ಕುಟುಂಬಗಳು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಯೋಜನೆಯಡಿಯಲ್ಲಿ ಖಾತೆಯ್ನು ತೆರೆಯಲು ಅನರ್ಹರಾಗಿರುತ್ತಾರೆ.

ಖಾತೆ ತೆರೆಯಲು ಅಗತ್ಯವಾದ ದಾಖಲೆಗಳು:

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ವೋಟರ್ ಐಡಿ
  • ಹಿರಿಯ ನಾಗರೀಕ ಕಾರ್ಡ್
  • ಜನನ ಪ್ರಮಾಣಪತ್ರ
  • ನಿವೃತ್ತ ಪ್ರಮಾಣಪತ್ರ
  • ಹಾಗೂ ಇನ್ನಿತರ ಅಗತ್ಯದ ದಾಖಲೆಗೆಳು

ಖಾತೆ ತೆರೆಯುವುದು ಹೇಗೆ?

  • ಅರ್ಹ ಫಲಾನುಭವಿಗಳು ಮೊದಲು ತಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ.
  • ಅಲ್ಲಿ ಹಿರಿಯ ನಾಗರೀಕರ ಉಳಿತಾಯ ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆಯಿರಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿಮಾಡಿ.
  • ಮೇಲೆ ತಿಳಿಸಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ ಹಾಗೂ ಠೇವಣಿ ಮೊತ್ತವನ್ನು ಸಲ್ಲಿಸಿ.
  • ನಂತರ ಅಲ್ಲಿನ ಬ್ಯಾಂಕ್ ಸಿಬ್ಬಂದಿ ಅಥವಾ ಪೋಸ್ಟ್ ಆಫೀಸ್ ಸಿಬ್ಬಂದಿ ನೀವು ಸಲ್ಲಿಸಿದ ಅಪ್ಲಿಕೇಶನ್ ಫಾರ್ಮ್ ಹಾಗೂ ದಾಖಲೆಗಳನ್ನು ಪರಿಶೀಲಿಸಿ SCSS ಖಾತೆಯನ್ನು ಸಕ್ರಿಯಗೊಳಿಸುತ್ತಾರೆ.

ಅಂತಿಮ ತೀರ್ಮಾನ:

ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಹಿರಿಯ ನಾಗರೀಕರ ನಿವೃತ್ತಿ ಜೀವನದ ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕ ಅತ್ಯುತ್ತಮ ಹೂಡಿಕೆ ಯೋಜನೆಯಾಗಿದೆ. ನಿವೃತ್ತಿ ನಂತರ ಯಾವುದೇ ತೊಂದರೆಗಳಿಲ್ಲದೆ ನಿಯಮಿತವಾಗಿ ಸ್ಥಿರವಾದ ಆದಾಯವನ್ನು ಗಳಿಸಲು ಇದೊಂದು ಉತ್ತಮ ಯೋಜನೆಯಾಗಿದೆ. ನೀವೇನಾದರೂ ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಬಯಸಿದರೆ ಇಂದೇ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment