PMFBY: ರೈತರಿಗೆ ಸಿಹಿ ಸುದ್ದಿ! ಬೆಳೆ ನಷ್ಟಕ್ಕೆ ನೇರ ಪರಿಹಾರ ಯೋಜನೆ ಆರಂಭ । ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ

ನಮಸ್ಕಾರ ರೈತಭಾಂದವರೇ, ನೀವು ಬೆಳೆದ ಬೆಳೆಗಳು ಅತಿಯಾದ ಮಳೆ, ಬರ, ಅಥವಾ ಕೀಡ ಬಾದೆಗಳಿಂದ ನಾಶವಾಗಿದೆಯಾ? ಇದರಿಂದ ನೀವು ತುಂಬಾ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದೀರಾ? ಈ ಸಂಕಷ್ಟದ ಸಮಯದಲ್ಲಿ ಸರ್ಕಾರದ ಪರಿಹಾರ ಮೊತ್ತದ ಅಗತ್ಯವಿದೆಯೇ? ನಿಮ್ಮ ನೆರವಿಗೆಂದೇ ಕೇಂದ್ರ ಸರ್ಕಾರವು ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ.

PMFBY Scheme for Farmers


ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆ, ಪ್ರಕೃತಿ ವಿಕೋಪಗಳು ಹಾಗೂ ಕೀಟಬಾದೆ ಅಥವಾ ರೋಗಗಳ ಕಾರಣದಿಂದ ಬೆಳೆ ನಷ್ಟವಾದರೆ, ಇದಕ್ಕೆ ಅಗತ್ಯವಾದ ವಿಮಾ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಹಾಗಿದ್ದರೆ ಏನಿದು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ? ಯೋಜನೆಯ ಪ್ರಯೋಜನಗಳೇನು? ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಸರ್ಕಾರದಿಂದ ರೈತರಿಗೆ ಎಷ್ಟು ಪರಿಹಾರ ದೊರೆಯುತ್ತದೆ? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

PMFBY

ಯೋಜನೆಯ ಅವಲೋಕನ:

ಯೋಜನೆಯ ಹೆಸರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
ಅರ್ಹ ಫಲಾನುಭವಿಗಳು ದೇಶದ ಎಲ್ಲ ಸ್ವಂತ ಜಾಮೀನು ಹೊಂದಿರುವ ರೈತರು
ಹಂಗಾಮು ಮುಂಗಾರು 2026
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಅಥವಾ ಆಫ್ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-07-2026

ಏನಿದು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ?

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎನ್ನುವುದು ಕೇಂದ್ರ ಸರ್ಕಾರವು ರೈತರಿಗಾಗಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಬೆಳೆ ವಿಮಾ ಯೋಜನೆಯಾಗಿದೆ. ರೈತರ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಫೆಬ್ರವರಿ 18, 2016 ಜಾರಿಗೊಳಿಸಿದ್ದು, ಪ್ರಕೃತಿ ವಿಕೋಪಗಳು, ಕೀಟಗಳು, ರೋಗಗಳಿಂದ ಆಗುವ ಬೆಳೆಗಳ ನಾಶಗಳಿಗೆ ರೈತರಿಗೆ ಹಣಕಾಸಿನ ನೆರವನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.

ಈ ಯೋಜನೆಯ ಮುಖ್ಯ ಉದ್ದೇಶ ರೈತರಿಗೆ ಕಡಿಮೆ ಪ್ರೀಮಿಯಂ ದರದಲ್ಲಿ ಸಮಗ್ರ ಬೆಳೆ ವಿಮಾ ಸೌಲಭ್ಯವನ್ನು ಒದಗಿಸುವುದು.

ಯೋಜನೆಯ ಉದ್ದೇಶ:

  • ಪ್ರಕೃತಿ ವಿಕೋಪಗಳಿಂದ ಬೆಳೆಗಳ ನಷ್ಟ ಅನುಭವಿಸುವ ರೈತರಿಗೆ ಈ ಸಮಯದಲ್ಲಿ ಆರ್ಥಿಕ ಸಹಾಯಧನವನ್ನು ಒದಗಿಸುವ ಮೂಲಕ ಅವರಿಗೆ ಬೆಂಬಲವನ್ನು ನೀಡುವುದು.
  • ಬೆಳೆಗಳ ನಷ್ಟವನ್ನು ಅನುಭವಿಸಿದ ನಂತರವೂ ಕೂಡ ರೈತರು ಭರವಸೆಯನ್ನು ಕಳೆದುಕೊಳ್ಳದೆ, ಮುಂದಿನ ವರ್ಷವೂ ಕೂಡ ಕೃಷಿ ಚಟುವಟಿಕೆಯನ್ನು ಮುಂದುವರೆಸಲು ಉತ್ತೇಜನ ನೀಡುವುದು.
  • ರೈತರಿಗೆ ನಿಗದಿತ ಸಮಯದಲ್ಲಿ ಬೆಳೆ ನಷ್ಟಕ್ಕೆ ವಿಮೆ ಒದಗಿಸುವ ಮೂಲಕ ಅವರು ಸಾಲದ ಸುಳಿಕೆ ಸಿಲುಕುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
  • ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಹೊಸ ಮತ್ತು ಆಧುನಿಕ ಬೇಸಾಯ ಪದ್ದತಿಯನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸುವುದು.

ಯೋಜನೆಯ ಪ್ರಯೋಜನ:

  • ರೈತರು ಅನೀರೀಕ್ಷಿತ ಹವಾಮಾನ ಬದಲಾವಣೆಗಳ ಕಾರಣದಿಂದ ನಷ್ಟವಾಗುವ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಹಣಕಾಸಿನ ನೆರವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಬಹುದು.
  • ಈ ಯೋಜನೆಯಡಿಯಲ್ಲಿ ರೈತರು ಕಡಿಮೆ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ಹೆಚ್ಚಿನ ಮೊತ್ತದ ಬೆಳೆ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ.
  • ರೈತರಿಗೆ ವಿಮಾ ಪರಿಹಾರ ಹಣವನ್ನು ಒದಗಿಸುವ ಮೂಲಕ ಪ್ರಕೃತಿ ವಿಕೋಪಗಳಿಂದ ಆಗುವ ಬೆಳೆನಷ್ಟಗಳಿಂದ ಪಾರಾಗಲು ರೈತರು ಸಾಲದ ಸುಳಿಗೆ ಸಿಲುಕುವುದನ್ನು ತಡೆಗಟ್ಟುವುದು.
  • ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯಡಿಯಲ್ಲಿ ಪರಿಹಾರವನ್ನು ಒದಗಿಸುವುದರಿಂದ ರೈತರ ಆರ್ಥಿಕ ಸಂಕಷ್ಟವನ್ನು ಕಡಿಮೆಯಾಗುತ್ತದೆ ಹಾಗೂ ರೈತರ ಕುಟುಂಬಗಳ ಜೀವನ ಮಟ್ಟವು ಸುಧಾರಿಸುತ್ತದೆ.

ವಿಮಾ ವ್ಯಾಪ್ತಿಗೆ ಬರುವ ಬೆಳೆಗಳು ಯಾವುದು?

ರೈತರು ವಿಮಾ ರಕ್ಷಣೆಯನ್ನು ಪಡೆಯಲು ಅರ್ಹವಾಗಿರುವ ಪ್ರಮುಖ ಬೆಳೆಗಳು ಈ ಕೆಳಕಂಡಂತಿದೆ.

ಧಾನ್ಯಗಳು:
  • ಭತ್ತ
  • ಮೆಕ್ಕೆ ಜೋಳ
  • ಜೋಳ
  • ರಾಗಿ
  • ಸಜ್ಜೆ
ದ್ವಿದಳ ಧಾನ್ಯಗಳು:
  • ಹೆಸರು ಬೆಳೆ
  • ಉದ್ದಿನ ಬೆಳೆ
  • ತೊಗರಿ
  • ಸೋಯಾಬಿನ್
  • ಹುರುಳಿ
ಎಣ್ಣೆ ಕಾಳುಗಳು:
  • ಶೇಂಗಾ
  • ಸೂರ್ಯಕಾಂತಿ
  • ಎಳ್ಳು
  • ಹರಳು
ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳು:
  • ಈರುಳ್ಳಿ
  • ಆಲೂಗಡ್ಡೆ
  • ಕಬ್ಬು
  • ಮೆಣಸಿನ ಕಾಯಿ
  • ಹತ್ತಿ
  • ಶುಂಠಿ
  • ಅರಿಶಿನ

ಬೆಳೆವಾರು ಪ್ರೀಮಿಯಂ ದರದ ವಿವರ:

  • ಮುಂಗಾರು ಬೆಳೆಗಳು: ಒಟ್ಟು ವಿಮಾ ಮೊತ್ತ 2%
  • ಹಿಂಗಾರು ಬೆಳೆಗಳು: ಒಟ್ಟು ವಿಮಾ ಮೊತ್ತ 1.5%
  • ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳು: ಒಟ್ಟು ವಿಮಾ ಮೊತ್ತ 5%

ಯಾವ ಯಾವ ಅಪಾಯಗಳಿಗೆ ವಿಮಾ ರಕ್ಷಣೆ ಸಿಗುತ್ತದೆ?

  • ಬರ, ಅತಿವೃಷ್ಟಿ, ಚಂಡಮಾರುತ, ಪ್ರವಾಹ, ಗಾಳಿಮಳೆ ಹಾಗೂ ಭೂ ಕುಸಿತಗಳಂತಹ ಪ್ರಕೃತಿ ವಿಕೋಪಗಳಿಗೆ ವಿಮಾ ರಕ್ಷಣೆ ಸಿಗುತ್ತದೆ.
  • ವಿವಿಧ ಬೆಳೆ ರೋಗಗಳಿಗೆ ಹಾಗೂ ಕೀಟ ದಾಳಿಗೆ ವಿಮಾ ರಕ್ಷಣೆ ಸಿಗುತ್ತದೆ.
  • ಕೊಯ್ಲಿನ ನಂತರ ಮಳೆ ಅಥವಾ ಇನ್ನಿತರ ಪ್ರಕೃತಿ ವಿಕೋಪಗಳಿಂದ ಆಗುವ ನಷ್ಟಗಳಿಗೂ ಸಹ ವಿಮಾ ರಕ್ಷಣೆ ಸಿಗುತ್ತದೆ.

ಅರ್ಹ ಫಲಾನುಭವಿಗಳು ಯಾರು?

  • ಪ್ರತಿ ಜಿಲ್ಲೆಗಳಿಗೆ ಸರ್ಕಾರವು ನಿಗದಿಪಡಿಸಿದ ಬೆಳೆಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಬೆಳೆದಿರುವ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
  • ರೈತರ ಹೆಸರಿನಲ್ಲಿ ಸರಿಯಾದ ಭೂ ದಾಖಲೆಗಳು ಇರಬೇಕು.
  • ಪ್ರಸ್ತುತ ಜಮೀನಿನಲ್ಲಿ ಹಂಗಾಮಿ ಬೆಳೆಗಳನ್ನು ಬಿತ್ತನೆ ಮಾಡಿರುವ ಕುರಿತು ಕೃಷಿ ಮತ್ತು ಕಂದಾಯ ಇಲಾಖೆಯಿಂದ ಬಿಟ್ಟನ ಪ್ರಮಾಣಪತ್ರವನ್ನು ಹೊಂದಿರಬೇಕು.
  • ಗುತ್ತಿಗೆ ಭೂಮಿ ಪಡೆದ ರೈತರು ಭೂ ಮಾಲೀಕರಿಂದ ಮಾಡಿಕೊಂಡ ಒಪ್ಪಂದ ಪ್ರಮಾಣಪತ್ರವನ್ನು ಹೊಂದಿರಬೇಕು.
  • ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪ್ರೀಮಿಯಂ ಹಣವನ್ನು ಪಾವತಿಸಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿರಬೇಕು.
  • ರೈತರ ಹೆಸರಲ್ಲೇ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಇರಬೇಕು ಹಾಗೂ ಇದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
  • ಭೂ ದಾಖಲೆಗಳು
  • ಬೆಳೆ ಬಿತ್ತನೆ ಪ್ರಮಾಣಪತ್ರ
  • ವಾಸಸ್ಥಳ ದೃಢೀಕರಣ ಪತ್ರ

ಅರ್ಜಿ ಸಲ್ಲಿಸುವ ವಿಧಾನ:

ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮಾ ಪರಿಹಾರವನ್ನು ಪಡೆಯಲು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಫಲಾನುಭವಿಗಳು ಈ ಕೆಳಗಿನ ಹಂತವನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಿ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
  • ಅರ್ಹ ಫಲಾನುಭವಿಗಳು ಮೊದಲು PMFBY ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
  • ಮುಖಪುಟದಲ್ಲಿರುವ ಫಾರ್ಮರ್ ಕಾರ್ನರ್ ಅನ್ನು ಕ್ಲಿಕ್ ಮಾಡಿ.
  • ಹೊಸ ಬಳಕೆದಾರಗಿದರೆ, ಮೊಬೈಲ್ ನಂಬರ್ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಲಾಗಿನ್ ಆಗಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ವೈಯಕ್ತಿಕ ವಿವರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಭೂ ದಾಖಲೆಯ ಸರ್ವೇ ನಂಬರ್ ಹಾಗೂ ಬಿತ್ತನೆ ಮಾಡಿದ ಮುಂಗಾರು ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಿ.
  • ನಿಗದಿತ ಪ್ರೀಮಿಯಂ ಮೊತ್ತವನ್ನು ಆನ್ಲೈನ್ ಪಾವತಿ ವಿಧಾನಗಳ ಮೂಲಕ ಪಾವತಿಸಿ.
  • ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ ಪಾವತಿ ರಶೀದಿಯನ್ನು ಇಟ್ಟುಕೊಳ್ಳಿ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗದ ರೈತರು, ತಮ್ಮ ಹತ್ತಿರದ ಬ್ಯಾಂಕ್ ಖಾತೆ, ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಗೆ ಭೇಟಿ ನೀಡಿ.
  • ಮೇಲೆ ತಿಳಿಸಲಾದ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಪ್ರೀಮಿಯಂ ಹಣವನ್ನು ನೀಡಿ ಅಲ್ಲಿ ಸಿಬ್ಬಂದಿಗಳ ಮೂಲಕ ವಿಮಾ ನೋಂದಣಿಯನ್ನು ಮಾಡಿಕೊಳ್ಳಿ.

ಕೊನೆಯ ಮಾತು:

ಸರ್ಕಾರವು ರೈತರ ಆರ್ಥಿಕ ಭದ್ರತೆಗಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅತಿವೃಷ್ಟಿಯಿಂದ ಅಥವಾ ಇನ್ನಿತರ ಪ್ರಕೃತಿ ವಿಕೋಪಗಳಿಂದ ನಷ್ಟವಾದ ಬೆಳೆಗಳಿಗೆ ಅನುಗುಣವಾಗಿ ರೈತರಿಗೆ ಬೆಳೆ ಪರಿಹಾರವನ್ನು ನೀಡಲಾಗುತ್ತಿದ್ದು, ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಲ್ಲುವುದಕ್ಕೆ ಅರ್ಜಿ ಸಲ್ಲಿಸಲು 31-07-2026 ಕೊನೆಯ ದಿನಾಂಕವಾಗಿರುತ್ತದೆ.

ನೀವು ಬೆಳೆದ ಬೆಳೆಗಳು ಕೂಡ ಪ್ರಕೃತಿ ವಿಕೋಪಗಳಿಂದ ನಾಶವಾಗಿದ್ದು ಸರ್ಕಾರದಿಂದ ಪರಿಹಾರವನ್ನು ಪಡೆದುಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ಇಂದೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment