Driver DL Scheme: ರೂ. 25,000 ಸಹಾಯಧನ! ಡ್ರೈವಿಂಗ್ ಲೈಸನ್ಸ್ ಹೊಂದಿರುವ ಚಾಲಕರಿಗೆ ಸರ್ಕಾರದಿಂದ ಹೊಸ ಯೋಜನೆ । ಇಂದೇ ಅಪ್ಲೈ ಮಾಡಿ

Driver: ವಾಹನ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್! ಡ್ರೈವಿಂಗ್ ಲೈಸನ್ಸ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಕರ್ನಾಟಕ ಸರ್ಕಾರದಿಂದ ಫ್ರೀ ಆಗಿ ರೂ. 25,000 ಸಹಾಯಧನ ನೀಡಲಾಗುತ್ತದೆ ಎನ್ನುವ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಒಂದು ಸಂದೇಶ ನಿಜವೋ ಸುಳ್ಳೋ ಎನ್ನುವ ಗೊಂದಲಗಳು ಜನಸಾಮಾನ್ಯರಲ್ಲಿ ಮೂಡುತ್ತಿದೆ.


ಸರ್ಕಾರದ ಈ ಒಂದು ಯೋಜನೆಯಡಿಯಲ್ಲಿ ಡ್ರೈವಿಂಗ್ ಲೈಸನ್ಸ್ ಹೊಂದಿರುವ ಆಟೋ ರಿಕ್ಷಾ, ಗೂಡ್ಸ್ ವಾಹನ, ವಾಣಿಜ್ಯ ವಾಹನ ಹಾಗೂ ಟ್ಯಾಕ್ಸಿ ಚಾಲಕರಿಗೆ ರೂ. 25,000/- ಸಹಾಯಧನವನ್ನು ನೀಡಲಾಗುತ್ತಿದ್ದು, ಈ ಒಂದು ಯೋಜನೆ ನಿಜವಾಗಿಯೂ ಜಾರಿಯಲ್ಲಿದೆಯಾ? ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯೋ? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ಈ ಒಂದು ನಿಜವಾಗಿಯೂ ಜಾರಿಯಲ್ಲಿದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುವು? ಅರ್ಹತಾ ಮಾನದಂಡಗಳೇನು? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

Driver

ಪ್ರಮುಖ ಹೈಲೈಟ್ ಪಾಯಿಂಟ್ಸ್:

* ಕರ್ನಾಟಕ ಸರ್ಕಾರದಿಂದ ಡ್ರೈವಿಂಗ್ ಲೈಸನ್ಸ್ ಹೊಂದಿರುವ ಚಾಲಕರಿಗೆ ಸಿಗಲಿದೆ ರೂ. 25,000/- ಸಹಾಯಧನ.
* ಯೋಜನೆಯ ಲಾಭವನ್ನು ಪಡೆಯಲು ಡ್ರೈವಿಂಗ್ ಲೈಸನ್ಸ್ ಹೊಂದುವುದು ಕಡ್ಡಾಯ.
* ಆಟೋ ರಿಕ್ಷಾ, ವಾಣಿಜ್ಯ ವಾಹನ, ಗೂಡ್ಸ್ ವಾಹನ ಹಾಗೂ ಟ್ಯಾಕ್ಸಿ ಚಾಲಕರು ಯೋಜನೆಯ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
* ಈ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಸರಿಯಾಗಿ ಅಧಿಕೃತ ಮಾಹಿತಿಯನ್ನು ಪರಿಶೀಲಿಸಿಕೊಳ್ಳಿ.

ಯೋಜನೆ ಜಾರಿಯಲ್ಲಿದ್ದರೆ, ಚಾಲಕರಿಗಾಗುವ ಪ್ರಯೋಜನವೇನು?

ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಲ್ಲಿ, ಹಲವಾರು ವಾಹನ ಚಾಲಕರಿಗೆ ಆರ್ಥಿಕ ನೆರವು ಲಭಿಸುತ್ತದೆ. ಚಾಲಕರಿಗೆ ಈ ಒಂದು ಸಹಾಯಧನ ಹೇಗೆಲ್ಲ ನೆರವಾಗಲಿದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

  • ಅರ್ಹ ಫಲಾನುಭವಿಗಳಿಗೆ ರೂ. 25,000/- ದ ವರೆಗೆ ಸಹಾಯಧನ ಸಿಗುತ್ತದೆ:

ಸರ್ಕಾರದ ಈ ಒಂದು ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಚಾಲಕರಿಗೆ ರೂ. 25,000/- ಆರ್ಥಿಕ ನೆರವು ಲಭಿಸಿದರೆ, ಅವರ ದೈನಂದಿನ ಹಾಗೂ ವೃತ್ತಿಪರ ಅಗತ್ಯತೆಗಳನ್ನು ಪೂರೈಸಲು ಸಹಕಾರಿ ಆಗುತ್ತದೆ.

  • ಚಾಲಕರಿಗೆ ಆರ್ಥಿಕ ಭದ್ರತೆ ಲಭಿಸುತ್ತದೆ:

ಪ್ರತಿದಿನದ ಆದಾಯದ ಮೇಲೆ ಅವಲಂಬಿತರಾಗಿರುವ ಆಟೋ, ಟ್ಯಾಕ್ಸಿ, ವಾಣಿಜ್ಯ ವಾಹನ ಚಾಲಕರಿಗೆ ಈ ಒಂದು ಸಹಾಯಧನವು ಹೆಚ್ಚಿನ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

  • ವಾಹನ ನಿರ್ವಹಣಾ ವೆಚ್ಚವನ್ನು ಭರಿಸಲು ನೆರವಾಗುತ್ತದೆ:

ಸರ್ಕಾರದ ಈ ಒಂದು ಸಹಾಯಧನದಿಂದಾಗಿ, ವಾಹನ ಸರ್ವಿಸ್, ಟೈರ್ ಬದಲಾವಣೆ, ಇಂಧನ ವೆಚ್ಚ, ವಾಹನ ರಿಪೇರಿಗಳಿಗೆ ಆಗುವ ವೆಚ್ಚವನ್ನು ಭರಿಸಬಹುದಾಗಿದೆ. ಇದರಿಂದ ವಾಹನ ಚಾಲಕರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.

  • ಕುಟುಂಬದ ನಿರ್ವಹಣೆಗೂ ಕೂಡ ನೆರವಾಗಲಿದೆ:

ಸರ್ಕಾರದ ಸಹಾಯಧನದಿಂದ ವಾಹನ ಚಾಲಕರು ತಮ್ಮ ವಾಹನ ರಿಪೇರಿಗಳ ವೆಚ್ಚವನ್ನು ಭರಿಸಿ, ಉಳಿದ ಹಣವನ್ನು ತಮ್ಮ ಮನೆಯ ನಿರ್ವಹಣೆಗೂ ಕೂಡ ಬಳಸಿಕೊಳ್ಳಬಹುದಾಗಿದೆ.

  • ಚಾಲಕರ ವೃತ್ತಿಗೆ ಉತ್ತೇಜನ ಸಿಗುತ್ತದೆ:

ಸಾರಿಗೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಚಾಲಕರಿಗೆ ಈ ಯೋಜನೆಯಡಿಯಲ್ಲಿ ಆರ್ಥಿಕ ನೆರವು ಲಭಿಸುವುದರಿಂದ, ಚಾಲಕರಿಗೆ ತಮ್ಮ ವೃತ್ತಿಯ ಮೇಲೆ ವಿಶ್ವಾಸ ಹೆಚ್ಚುತ್ತದೆ ಹಾಗೂ ಸರ್ಕಾರ ನಮಗೆ ಬೆಂಬಲ ನೀಡುತ್ತದೆ ಎನ್ನುವ ಮನೋಭಾವ ಇರುತ್ತದೆ.

  • ನೇರ ಪಾವತಿ ಮೂಲಕ ಹಣ ವರ್ಗಾವಣೆ:

ಒಂದು ವೇಳೆ ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೊಳಿಸಿದರೆ, ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಫಲಾನುಭವಿ ಚಾಲಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಹಾಗೂ ಹೆಚ್ಚು ಪಾರದರ್ಶಕವಾಗಿರುತ್ತದೆ.

ಅರ್ಹ ಫಲಾನುಭವಿಗಳು ಯಾರು?

  • ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ಮಾನ್ಯ ಡ್ರೈವಿಂಗ್ ಲೈಸನ್ಸ್ ಅನ್ನು ಹೊಂದಿರಬೇಕು.
  • ಅರ್ಜಿ ದಾರರು ಸರ್ಕಾರದ ಯೋಜನೆಯಡಿಯಲ್ಲಿ ಸಮಾನ ಸಹಾಯಧನವನ್ನು ಪಡೆದಿರಬಾರದು.
  • ಅರ್ಜಿದಾರರು ಸಾರಿಗೆ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರಬೇಕು.
  • ಆಟೋ ರಿಕ್ಷಾ ಚಾಲಕರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಟ್ಯಾಕ್ಸಿ ಚಾಲಕರು, ಗೂಡ್ಸ್ ವಾಹನ ಚಾಲಕರು ಹಾಗೂ ವಾಣಿಜ್ಯ ವಾಹನ ಚಾಲಕರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಮಾನ್ಯ ಡ್ರೈವಿಂಗ್ ಲೈಸನ್ಸ್
  • ವಾಹನದ ನೋಂದಣಿ ಪ್ರಮಾಣಪತ್ರ
  • ಬ್ಯಾಂಕ್ ಪಾಸ್ ಬುಕ್ ಅಥವಾ ಬ್ಯಾಂಕ್ ಖಾತೆ ವಿವರಗಳು
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಮೊಬೈಲ್ ಸಂಖ್ಯೆ
  • ನಿವಾಸ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಹಾಗೂ ಇತರೆ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಮೊದಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್ ಅಥವಾ ಸಂಬಂಧಿತ ಇಲಾಖೆಯ ಪ್ರಕಟಣೆಯನ್ನು ಪರಿಶೀಲಿಸಬೇಕು.
  • ನಂತರ ಆನ್‌ಲೈನ್ ಅರ್ಜಿ ಪೋರ್ಟಲ್ ಮೂಲಕ ಮೂಲ ದಾಖಲೆಗಳನ್ನು ಬಳಸಿ ನೋಂದಣಿ ಮಾಡಬೇಕು.
  • ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಉಸೆರ್ ಐಡಿ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
  • ಅರ್ಜಿ ಫಾರ್ಮ್‌ನಲ್ಲಿ ವೈಯಕ್ತಿಕ ವಿವರಗಳು, ವಾಹನ ಮಾಹಿತಿ ಹಾಗೂ ಡ್ರೈವಿಂಗ್ ಲೈಸನ್ಸ್ ವಿವರಗಳನ್ನು ನಮೂದಿಸಬೇಕು.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
  • ಸಲ್ಲಿಸಿದ ಅರ್ಜಿಯ ಸ್ಟೇಟಸ್ ಅನ್ನು ಆನ್‌ಲೈನ್ ಮೂಲಕ ಟ್ರ್ಯಾಕ್ ಮಾಡಬಹುದು.
  • ಅರ್ಜಿ ಪರಿಶೀಲನೆಯ ನಂತರ ಅರ್ಹರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಸಹಾಯಧನ ಜಮೆಯಾಗುವ ಸಾಧ್ಯತೆ ಇರುತ್ತದೆ.

ಅಂತಿಮ ತೀರ್ಮಾನ:

ಕರ್ನಾಟಕ ಸರ್ಕಾರವು ನಿರುದ್ಯೋಗ ಯುವಕರಿಗೆ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಸ್ವಂತವಾಗಿ ವಾಹನ ಖರೀದಿಸಲು ಆರ್ಥಿಕ ನೆರವನ್ನು ನೀಡಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಯೋಜನೆಯಡಿಯಲ್ಲಿ ವಿವಿಧ ವರ್ಗಗಳ ಫಲಾನುಭವಿಗಳಿಗೆ ಅನುಗುಣವಾಗಿ ರೂ. 75,000/- ದಿಂದ ರೂ. 4,00,000/- ವರೆಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಆದರೆ ಸರ್ಕಾರವು ಪ್ರತಿಯೊಬ್ಬ ಚಾಲಕರಿಗೆ ರೂ. 25,000/- ಆರ್ಥಿಕ ಸಹಾಯಧನವನ್ನು ನೀಡುವುದಾಗಿ ಹೇಳಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಯೋಜನೆಯ ಕುರಿತು ಸರ್ಕಾರವು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಇನ್ನು ಮುಂದೆಯಾದರೂ ಈ ಯೋಜನೆಯನ್ನು ಚಾಲ್ತಿಗೆ ತರಬಹುದೇ ಎಂದು ಕಾದುನೋಡಬೇಕಿದೆ.


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment